ಅಲ್ಲಾ, ಈ ನಮ್ಮ ಕಸ್ತೂರಿ ಕನ್ನಡದ ಹಿರಿಯ ಸಾಹಿತಿಗಳು
ಹೀಗೇಕೆ ಕೆಸರೆರಚುತ್ತಾ ಕಚ್ಚಾಡುತ್ತಿದ್ದಾರೆ..?
ಯು.ಆರ್. ಅನಂತ ಮೂರ್ತಿಯವರು ತಮ್ಮ
ಇತ್ತೀಚಿನ “ಸೃಜನಶೀಲತೆಯ ಅಗ್ನಿ ದಿವ್ಯ” ಲೇಖನದಲ್ಲಿ
(ಪ್ರ.ವಾ-26-06-11)ಎಸ್.ಎಲ್.ಭೈರಪ್ಪ ಸಮರ್ಥರಾದ ಲೇಖಕರಾಗಿವುದರಿಂದ ಅವರನ್ನು ಐಡಿಯಾಲಜಿ ಎಂಬ
ರಾಹುವಿನಿಂದ ಬಿಡುಗಡೆ ಮಾಡಿದ ತಕ್ಷಣ ಕೃತಿಯ ಒಳಗಿರುವ ಕಲೆ ಗೋಚರಿಸತೊಡಗುತ್ತದೆ. ನಮ್ಮ ಕೆಲವು
ಎಡ ಪಂಥೀಯ ಲೇಖಕರೂ ಕೂಡಾ ಅವರ ಅಬ್ಬ್ರದ ಮಾತಿನ ರತಿಯಲ್ಲಿ ಕೇತು ಗ್ರಸ್ತರಾಗಿರುತ್ತಾರೆ.
ಒಟ್ಟಿನಲ್ಲಿ ಎಲ್ಲವೂ ಬೆಳಕನ್ನು ಮಾಯಮಾಡುವ ಗ್ರಹಣಗಳೇ.. ಎಂದಿದ್ದಾರೆ?!!
ಇನ್ನು ಬರಗೂರು ರಾಮಚಂದ್ರಪ್ಪನವರೋ
ಅನಂತ ಮೂರ್ತಿಯವರ ಹೇಳಿಕೆ ರಾಹುಗ್ರಸ್ತ ಮತ್ತು ಕೇತುಗ್ರಸ್ತ ಇವುಗಳ ಬಗ್ಗೆ ಪ್ರಶ್ನಿಸಿ
ಖಂಡಿಸಿರುವುದು ಸರಿಯೇ ಆದರೂ ಅವರೂ ಭೈರಪ್ಪನವರ ಐಡಿಯಾಲಜಿ
ನನಗೂ ಇಷ್ಟವಾಗುವುದಿಲ್ಲ…..ಎನ್ನುವುದೇಕೆ..?!!.
ಈ ಹಿರಿಯ ಸಾಹಿತಿಗಳ ಐಡಿಯಾಲಜಿ ಏನೇ ಇರಲಿ, ಭೈರಪ್ಪನವರ
ಕೃತಿಗಳು ಅಪಾರ ಓದುಗರನ್ನು ದೇಶವಿದೇಶಗಳಲ್ಲಿ ಗಳಿಸಿದ್ದು ಮನೆಮನೆ ಮಾತಾಗಿವೆಯಲ್ಲ….
ಸಾಹಿತ್ಯ ಕೃತಿಗಳಲ್ಲಿ ಕಾದಂಬರಿಗಳು ಜನಸಾಮಾನ್ಯರನ್ನು ತಲುಪುವುದಷ್ಟೇ ಮುಖ್ಯವಲ್ಲದೇ ಇಂತಹ
ಹಿರಿಯ ಸಾಹಿತಿಗಳನ್ನು ತೃಪ್ತಿಪಡಿಸಲಿಕ್ಕಾಗಿಯೆ ಹುಟ್ಟಿಕೊಳ್ಳುತ್ತವೆಯೇನು? ಸಾಹಿತಿ ವಿಮರ್ಶಕರ ಗುಂಪಿನ ವಲಯದಲ್ಲಿ ಆ ಮಟ್ಟದ
ಐಡಿಯಾಲಜಿಯಲ್ಲಿ ತಯಾರಾಗುವ ಪ್ರಾಡಕ್ಟುಗಳೇನು..?
ಒಟ್ಟಿನಲ್ಲಿ ಸಮಾಜದ ಮೇಲೆ ಬೆಳಕು ಚೆಲ್ಲುವ ಕೃತಿಗಳು,
ಸಾಮಾನ್ಯ ಜನತೆಯನ್ನು ಮನವನ್ನು ಮುಟ್ಟಿ ತಟ್ಟಿ ಎಚ್ಚರಿಸುವ ಕೃತಿಗಳನ್ನು ಭೈರಪ್ಪನವರು
ಬರೆದಿದ್ದಾರೆಂಬುದಕ್ಕೆ ಅವರ ಅಪಾರ ಜನಪ್ರಿಯತೆಯೇ ಸಾಕ್ಷಿ.
ಒಟ್ಟಿನಲ್ಲಿ ಸಾಹಿತ್ಯ ಕೃತಿಯೊಂದು ಕರ ಪತ್ರವೋ, ಮಹಾನ್ ಕಲಾ ಕೃತಿಯೋ
ಎಂಬುದನ್ನು ಓದುಗರು ಮೊದಲು ನಿರ್ಧರಿಸುತ್ತಾರಲ್ಲವೇ…..ಪಂಡಿತರು ವಿಮರ್ಶಕರ “ಐಡಿಯಾಲಜಿ” ಬೇಕಿಲ್ಲ ಓದುಗ ರಿಗೆ.
ಸಾಮಾನ್ಯ ಜನತೆಗೆ ತಲುಪುವ ಸಾಹಿತ್ಯ
ಕೃತಿಗಳನ್ನು ಬರೆದಿರುವ ಭೈರಪ್ಪನವರಿಗೆ ಆ ಬಗ್ಗೆ ಚಿಂತೆ ಇರುವಂತಿಲ್ಲವೆಂದು ಕಾಣುತ್ತದೆ. ಕನ್ನಡದ
ಕಂಪನ್ನುಸೂಸುವ ಜನತೆಗೆ ಬೆಳಕನ್ನು ಚೆಲ್ಲುವ ಕೆಲಸವನ್ನಷ್ಟೇ ಅವರು ಮಾಡಿದ್ದಾರೆ ಮಾಡುತ್ತಿದ್ದಾರೆ ಎಂದೇ
ತಿಳಿದಿದ್ದಾರೆ ಕೋಟ್ಟಾನು ಕೋಟಿ ಕನ್ನಡಿಗರು.
Posted on June 29, 2011, in ಸಾಹಿತ್ಯ-ಕಲೆ, ಸುದ್ದಿ ಸ್ವಾರಸ್ಯ, ಹೇಳಲೇ ಬೇಕೆನಿಸಿದ್ದು.... Bookmark the permalink. Leave a Comment.





Leave a Comment
Comments (0)